Monday, August 16, 2010

ಗಣಿ ವಚನಗಳು

ಗಣಿ ವಚನಗಳು

೧)
ಅಗೆದರೆ ಖನಿಜದ ಮಣ್ಣಿನಂತಿರಬೇಕು.
ಅಗೆದರೆ ರೆಡ್ಡಿಗಳು ಮೆಚ್ಚಿ ಅಹುದಹುದೆನ್ನಬೇಕು
ಅಗೆದು ಮಾರಿದರೆ ವಿರೋಧಿಗಳು ಸುಮ್ಮನಿರಬೇಕು
ಕುಡಲಸಂಗಮದೆವಾ......
೨)
ಬೆಟ್ಟದಾ ಮೇಲೊಂದು ಗಣಿಗಾರಿಕೆಮಾಡಿ
ವಿರೋಧಿಗಳಿಗೆ ಅಂಜಿದೊಡೆ ಎಂಥಯ್ಯಾ?
ಸಮುದ್ರದಾ ದಡದಲ್ಲಿ ಬಚ್ಚಿಟ್ಟು ಸಿಬಿಐಗೆ ಹೆದರಿದರೆ ಹೇಗಯ್ಯಾ?
ಅಕ್ರಮ ಅಕ್ರಮವೆಂದು ಕೂಗಲು ಅಕ್ರಮ ನಿಲ್ಲುವುದೇ ಸಿದ್ದರಾಮಯ್ಯ?

1 comment:

Followers